ಪೋಸ್ಟ್‌ಗಳು

ಡಿಸೆಂಬರ್, 2017 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಹಂದರದೊಳಗೆ

ಇಮೇಜ್
ಮಿದುಗೊಡೆ ಹಂದರದಿ ಕಲಾವಿದರಿಬ್ಬರು ಕೂಡಿ ಸುರಿದ ಬಣ್ಣದ ಆರೋಪಕ್ಕೆ ಗುರಿಯಾಗಿ ಬಂಧಿಯಾಗಿ ಬಿದ್ದಿದ್ದೇನೆ ಯಾವ ಕೋರ್ಟು, ಬೇಡಿಗಳಿಲ್ಲದೆ ಬೆಳಕು ಶೂನ್ಯ ಕೋಟೆಯೊಳಗೆ ಬೆಟ್ಟದಲಿ ಹುಟ್ಟಿದ ಮರಕ್ಕೇನು ಗೊತ್ತು ಬೀಜವನು ಬಿತ್ತಿದವರಾರೆಂದು ಎನಗೂ ಇಲ್ಲಿ ಸುಳಿವು ಇಲ್ಲ ಬಿತ್ತಿದ್ದಾರೆ... ಬೆಳೆಯುತ್ತಿದ್ದೇನೆ... ವ್ಯಂಗ್ಯ, ಪ್ರಶಂಸೆ, ಆರೋಪ ಪ್ರವಚನಗಳ ಮಧ್ಯೆ ಸುಖವನು ಮರೆಸಿ ಸಾಲಕ್ಕೆ ಹೇತುವಾಗಿ ಬಿಳಿಯಂಗಿ ದೇವರ ಹುಂಡಿ ತುಂಬಿದ್ದೇನೆ ಮುಂದೆ...! ಕಸವಾಗಿ ಕೊಳೆತು ಗೊಬ್ಬರವಾಗಿ, ನಾರಿ ಗಬ್ಬೆದ್ದು ಹೋಗುವೆನೊ..!? ಜೋಕಾಲಿ ಪದಕೆ ಕಿವಿಯಾಗಿ, ಮುದುಡಿ ಮುದ್ದು ಕೂಸಾಗಿ ನಲಿಯುವೆನೋ..!? ಧಾವಿಸುತ್ತಿವೆ... ಮತಿ ಬಲಿಯುವ ಮುನ್ನ ದಿಕ್ಕೆಂಟು ಭಾಗದಿಂದ ದಿಕ್ಕೆಟ್ಟ ಪ್ರಶ್ನೆಗಳು ಸಮ್ಮತಿ ಅಸಮ್ಮತಿಗೆ ಸಾಕ್ಷಿ ನಾನು.. ಸೋಲು ಗೆಲುವಿನ ನಿಷ್ಕರ್ಷೆ ನಾನು.. ಎಲ್ಲವೂ ಅಸಂಗತ, ಗೋಜಲು ಕರುಳ ಹಗ್ಗದಲಿ ಹೊಸೆದ ಬಾಂಬು ನಾನು ರಕ್ತರಾಡಿಯಲ್ಲೆ ಪ್ರಕಟವಾಗುತ್ತೇನೆ ಚಿತ್ಕಾರ, ಚಿರಾಟ ಕಣ್ಣೀರ ವಿಷಮಾವಸ್ಥೆಯಲಿ ಕೊನೆಗೆಲ್ಲ ಶಾಂತ, ಸಂತೋಷ ಮೌನದಲಿ... ಮಿದುಗೊಡೆ ಹಂದರದೊಳಗೆ ಮಾಂಸಮುದ್ದೆಯಾಗಿ ನೀವು ಹೊಲಿಯುವ ಕುಲಾವಿಗೆ ದೇಹ ಹೊಂದಿಸುತ್ತಿರುವೆ ಮಳೆಯಾಸೆ ಹೊತ್ತ ದಟೈಸಿ ಕವಿದ ಕಾರ್ಮೋಡದಂತೆ ಗೋಜಲಿನಿಂದ ಮಗ್ಗುಲು ಬದಲಾಯಿಸ ಹೊರಟ ಹೆಸರಿಡುವ ಮೊದಲು ತಲೆಕೆಳಗಾದ ‘ಭ್ರೂಣ’ ನಾನು ಮಿದುಗೊಡೆ ಹಂದರದಿ ಯಾವ ಕೋರ್ಟು, ಬೇಡಿಗಳಿಲ್ಲದೆ ಕಲಾವಿದರಿಬ್ಬರು ಕೂಡಿ ಸುರ...

ಬಹುಮುಖಿ ಪ್ರತಿಭೆ ಕೆ.ಪಿ ತೇಜಸ್ವಿಯವರ ಬದುಕು ಬರಹ

ಇಮೇಜ್
  ಕನ್ನಡದ ದೈತ್ಯ ಪ್ರತಿಭೆ ಕುವೆಂಪು ಅವರ ಮುಂದುವರೆದ  ಭಾಗವಾಗಿ ಕನ್ನಡದಲ್ಲಿ ಸಾಹಿತ್ಯ ಕೃಷಿ ಮಾಡಿದವರು ಪೂರ್ಣಚಂದ್ರ ತೇಜಸ್ವಿಯವರು. ಕುವೆಂಪು ಅವರ ಮಗನಾದರೂ ಬೆಳೆದದ್ದು ಮಾತ್ರ ಅಪ್ಪಟ ಸ್ವತಂತ್ರ ಪ್ರತಿಭಯಾಗಿಯೆ. ಈ ಕಾರಣಕ್ಕಾಗಿಯೊ ಏನೊ ಕುವೆಂಪು ಕಾಡು ಬಿಟ್ಟು ನಾಡು ಸೇರಿದರು, ತೇಜಸ್ವಿ ನಾಡಿನ ಗುಂಗು ತೊರೆದು ಪ್ರಕೃತಿಯಲ್ಲಿ ಲೀನವಾದರು. ಕೆ.ಪಿ ತೇಜಸ್ವಿಯವರ ಬದುಕು ಬಹು ಆಯಾಮದ ವರ್ಣರಂಜಿತ ಬದುಕು. ತಂದೆಯೂ ಮಗನನ್ನು ಯಾವ ವಿಚಾರದಲ್ಲೂ ನಿರ್ಬಂಧಿಸದೆ ಸ್ವತಂತ್ರ ಪ್ರವೃತ್ತಿಯನ್ನು ಮಗನಲ್ಲಿ ಬಿತ್ತಿದರು. ಮಗನ ಪ್ರತಿಭೆಗೆ ನೀರೆರೆದು ಪೋಷಿಸಿದರು. ಅಂತೆಯೇ ಮಗನೂ ತಂದೆಯ ನಂಬಕೆಯನ್ನು ಹುಸಿಗೊಳಿಸದೆ ಕನ್ನಡ ಸಾಹಿತ್ಯ ಲೋಕದಲ್ಲಿ ವಿರಾಜಿಸಿದರು. ಆದರೆ ಅವರ ಅಕಾಲಿಕ ಮರಣ ಕನ್ನಡ ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟವಾಯಿತು. ನಷ್ಟಮಾತ್ರವಲ್ಲ ಭವಿಷ್ಯದಲ್ಲಿ ಕನ್ನಡಕ್ಕೆ ಜ್ಞಾನಪೀಠ ಪ್ರಶಸ್ತಿ ಬರುವ ಅವಕಾಶವೂ ತಪ್ಪಿತು ಎಂಬ ನಿರಾಶೆ ಸಾಹಿತ್ಯ ವಲಯದಲ್ಲಿ ಕೇಳಿಬಂತು.     ನಾನು ಇತ್ತೀಚಿಗೆ ತೇಜಸ್ವಿಯವರ ಕಾದಂಬರಿಗಳನ್ನೆಲ್ಲ ಓದಿ ಮುಗಿಸಿದೆ. ಅವರ ಕಥೆಗಳನ್ನು ‘ಅಬಚೂರಿನ ಪೋಸ್ಟಾಫಿಸು’ ಪುಸ್ತಕದಲ್ಲಿ ಓದಿದ್ದೆ, ಅಲ್ಲದೆ ಬಿಡಿ ಬಿಡಿಯಾಗಿಯೂ ಓದಿದ್ದೇನೆ. ಪ್ರತಿಯೊಂದು ಕಥೆ. ಕಾದಂಬರಿಯಲ್ಲೂ ಪ್ರಕೃತಿ ತೇಜಸ್ವಿಗೆ ಬೆರಗಾಗಿ ಕಂಡಿದೆ. ಓದುಗನಿಗೂ ಈ ಅನುಭವವಾಗುತ್ತದೆ ಮತ್ತು ಅವರ ಬರಹಗಳಿಗೂ...