ಬಹುಮುಖಿ ಪ್ರತಿಭೆ ಕೆ.ಪಿ ತೇಜಸ್ವಿಯವರ ಬದುಕು ಬರಹ
ಕನ್ನಡದ ದೈತ್ಯ ಪ್ರತಿಭೆ ಕುವೆಂಪು ಅವರ ಮುಂದುವರೆದ ಭಾಗವಾಗಿ ಕನ್ನಡದಲ್ಲಿ ಸಾಹಿತ್ಯ ಕೃಷಿ ಮಾಡಿದವರು ಪೂರ್ಣಚಂದ್ರ ತೇಜಸ್ವಿಯವರು. ಕುವೆಂಪು ಅವರ ಮಗನಾದರೂ ಬೆಳೆದದ್ದು ಮಾತ್ರ ಅಪ್ಪಟ ಸ್ವತಂತ್ರ ಪ್ರತಿಭಯಾಗಿಯೆ. ಈ ಕಾರಣಕ್ಕಾಗಿಯೊ ಏನೊ ಕುವೆಂಪು ಕಾಡು ಬಿಟ್ಟು ನಾಡು ಸೇರಿದರು, ತೇಜಸ್ವಿ ನಾಡಿನ ಗುಂಗು ತೊರೆದು ಪ್ರಕೃತಿಯಲ್ಲಿ ಲೀನವಾದರು. ಕೆ.ಪಿ ತೇಜಸ್ವಿಯವರ ಬದುಕು ಬಹು ಆಯಾಮದ ವರ್ಣರಂಜಿತ ಬದುಕು. ತಂದೆಯೂ ಮಗನನ್ನು ಯಾವ ವಿಚಾರದಲ್ಲೂ ನಿರ್ಬಂಧಿಸದೆ ಸ್ವತಂತ್ರ ಪ್ರವೃತ್ತಿಯನ್ನು ಮಗನಲ್ಲಿ ಬಿತ್ತಿದರು. ಮಗನ ಪ್ರತಿಭೆಗೆ ನೀರೆರೆದು ಪೋಷಿಸಿದರು. ಅಂತೆಯೇ ಮಗನೂ ತಂದೆಯ ನಂಬಕೆಯನ್ನು ಹುಸಿಗೊಳಿಸದೆ ಕನ್ನಡ ಸಾಹಿತ್ಯ ಲೋಕದಲ್ಲಿ ವಿರಾಜಿಸಿದರು. ಆದರೆ ಅವರ ಅಕಾಲಿಕ ಮರಣ ಕನ್ನಡ ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟವಾಯಿತು. ನಷ್ಟಮಾತ್ರವಲ್ಲ ಭವಿಷ್ಯದಲ್ಲಿ ಕನ್ನಡಕ್ಕೆ ಜ್ಞಾನಪೀಠ ಪ್ರಶಸ್ತಿ ಬರುವ ಅವಕಾಶವೂ ತಪ್ಪಿತು ಎಂಬ ನಿರಾಶೆ ಸಾಹಿತ್ಯ ವಲಯದಲ್ಲಿ ಕೇಳಿಬಂತು. ನಾನು ಇತ್ತೀಚಿಗೆ ತೇಜಸ್ವಿಯವರ ಕಾದಂಬರಿಗಳನ್ನೆಲ್ಲ ಓದಿ ಮುಗಿಸಿದೆ. ಅವರ ಕಥೆಗಳನ್ನು ‘ಅಬಚೂರಿನ ಪೋಸ್ಟಾಫಿಸು’ ಪುಸ್ತಕದಲ್ಲಿ ಓದಿದ್ದೆ, ಅಲ್ಲದೆ ಬಿಡಿ ಬಿಡಿಯಾಗಿಯೂ ಓದಿದ್ದೇನೆ. ಪ್ರತಿಯೊಂದು ಕಥೆ. ಕಾದಂಬರಿಯಲ್ಲೂ ಪ್ರಕೃತಿ ತೇಜಸ್ವಿಗೆ ಬೆರಗಾಗಿ ಕಂಡಿದೆ. ಓದುಗನಿಗೂ ಈ ಅನುಭವವಾಗುತ್ತದೆ ಮತ್ತು ಅವರ ಬರಹಗಳಿಗೂ...
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ