ಪೋಸ್ಟ್‌ಗಳು

ಸಮತೆಯ ಕಟ್ಟು

  ಸಮತೆಯ ಕಟ್ಟು   ಹರಿದ ಅಂಗಿಗೆ ಕೊಳೆತ ಚಡ್ಡಿಗೆ ತೆರಿಗೆ ಕಟ್ಟುವ ಸಮಯ ಬಂದಿದೆ ನಿಮ್ಮ ದೇವರ ಜಗುಲಿ ಮೇಲಿನ ಕಟ್ಟಿಗೆ ಭಯವೂ ಕಾಡುತಿದೆ   ಹರಿದ ಗೋಣಿಚೀಲ ಮಸ್ತಕದ ದಾಸ್ತಾನಾಗುವ ಸಮಯ ಬಂದಿದೆ ಮಸ್ತಕ ಪುಸ್ತಕದಿಂದ ದೂರವಾದ ಕೈಗಳು ನಿಮ್ಮ ಜಗುಲಿ ಮೇಲಿನ ಕಟ್ಟಿಗೆ ಸವಾಲೊಡ್ಡಿವೆ ಸಮಯ ಸರಿದು ಹೋಗುವ ಮುನ್ನ ತೆರಿಗೆ ಕಟ್ಟಿ   ಕುರ್ಚಿಯ ಕಾಲುಗಳು ಅಲುಗಾಡುವ ಸಮಯ ಬಂದಿದೆ ಕಾಲುಗಳೆ ಇಲ್ಲದ ಕಾಲುಗಳು ನಿಮ್ಮ ಕನಸುಗಳನು ಕದಡಬಹುದು ಹೊತ್ತು ಸತ್ತು ಹೋಗುವ ಮುನ್ನ ತೆರಿಗೆ ಕಟ್ಟಿ   ನಿಮ್ಮ ಕಟ್ಟಳೆಗಳನ್ನು ಮೀರುವ ಸಮಾನತೆಯ ಕಟ್ಟು ಬಂದಿದೆ ನಿಮ್ಮ ಬೂದಿ ಹಾರಿ ಹೋಗುವ ಮುನ್ನ ತೆರಿಗೆ ಕಟ್ಟಿ                                                                                                       ...

ಬಿದಿರಕ್ಕಿ

ಇಮೇಜ್
                         ಸೇಸಪ್ಪ ಗೌಡರ ಮನೆಯಂಗಳದಲ್ಲಿ ಬೆಳಗ್ಗೆಯೇ ಜನ ಸೇರಿದ್ದರು. ಅವರೆಲ್ಲ ನೆಟಿಗೆ ತೆಗೆಯುತ್ತಿದ್ದ ತಮ್ಮೂರಿನ ಮನೆಯ ಮಾಡುಗಳ ಬಗ್ಗೆ ಮಾತನಾಡುತ್ತಿದ್ದರು. ಸೇಸಪ್ಪ ಗೌಡರು ಹೇಗೊ ಅಲ್ಪಸ್ವಲ್ಪ ದುಡ್ಡು ಉಳಿಸಿ ಪಕ್ಕಾಸು ಮಾಡುವ ಯೋಚನೆ ಮಾಡಿದ್ದರು. ಆದಂ ಬ್ಯಾರಿಗೆ ಅಡ್ವಾನ್ಸೂ ಕೊಟ್ಟಿದ್ದರು. ಅದು ನಿನ್ನೆ ದಿನ ಸಂಜೆ ಊರಿಡಿ ಸುದ್ದಿಯಾಗಿತ್ತು. ಜನ ಊರಿನ ಗಡಂಗಿನಲ್ಲಿ ಕಳ್ಳು ಕುಡಿಯುತ್ತಾ ಮೀಸೆಗಂಟಿದ ನೊರೆಯನ್ನು ಬೈರಾಸಿನಿಂದ ಒರೆಸಿಕೊಳ್ಳುತ್ತಾ ಮಾತಿಗಿಳಿಯುತ್ತಿದ್ದರು. ಈ ಬಾರಿಯ ಮಳೆಗಾಲವನ್ನು ನೆನೆಸಿಕೊಂಡಾಗಲೆ ತಲೆಗೇರಿದ ನಶೆ ಜರ್ರನೆ ಇಳಿಯುತ್ತಿತ್ತು. ಸೇಸಪ್ಪ ಗೌಡರು ಪಕ್ಕಾಸಿಗೆ ಅಡ್ವಾನ್ಸ್ ಕೊಟ್ಟಿದ್ದು ತಮ್ಮ ಮನೆಯ ಮಾಡಿನ ಆಯುಷ್ಯವೂ ಮುಗಿದಿದೆ ಎನ್ನುವ ಸೂಚನೆಯಿದು ಎನ್ನವುದು ಅವರಿಗೆ ಅರಿವಾಗಿತ್ತು.     ಆರುವರ್ಷದ ಹಿಂದಿನ ಮಾತುಗಳಿವು. ವರ್ತನಾಪುರದ ಎದುರಿನ ಗುಡ್ಡೆಯ ನೆತ್ತಿಯಿಂದ ಪಾದಮೂಲದವರೆಗೂ ಎಲ್ಲೆಡೆಯೂ ಹಿಂಡು ಹಿಂಡು ಬಿದಿರು. ಎಲ್ಲಿ ನೋಡಿದರೂ ಬಿದಿರೇ ಬಿದಿರು. ಬಸಳೆ ದೊಂಪಕ್ಕೆ, ಅಲಸಂಡೆ ಲಾಟೆಗೆ, ಬೇಲಿಗೆ, ಕೈಸಂಕ, ತೋಡಿನ ಸಂಕ, ಮನೆ ಮಾಡು, ಅದಿರಲಿ ಬಚ್ಚಲ ಹಂಡೆಯ ನೀರು ಕಾಯಿಸಲು, ಭತ್ತ ಬೇಯಿಸಲು ಎಲ್ಲೆಡೆ ಬಿದಿರಿನದ್ದೆ ಕಾರುಬ...

ಎರಡೆ ನಿಮಿಷದ ಮೌನಾಚರಣೆ

ಇಮೇಜ್
            ಗೆಳೆಯ ರಟ್ಟೀಹಳ್ಳಿ ರಾಘವಾಂಕುರ ಅವರ 'ಎರಡೆ ನಿಮಿಷದ ಮೌನಾಚರಣೆ' ಎನ್ನುವ ಶಿರ್ಷಿಕೆಯ ಗಜಲ್‍ನ್ನು ಸಾಹಿತ್ಯಾಸಕ್ತರು ಓದಿ ಪ್ರತಿಕ್ರಿಯಿಸಲಿ ಎನ್ನುವ ಕಾರಣಕ್ಕಾಗಿ 'ಮುಕ್ತಕಂಠ' ಬ್ಲಾಗ್‍ನಲ್ಲಿ ಪ್ರಕಟಿಸಿದ್ದೇನೆ. ಸದಾ ಸಾಹಿತ್ಯ ವಿಚಾರ ಸೇರಿದಂತೆ ನಿತ್ಯದ ವಿಚಾರಗಳನ್ನು ಪರಸ್ಪರ ಹಂಚಿಕೊಳ್ಳುವ ನಾವಿಬ್ಬರೂ ಅನಿಕೇತನ ವಿದ್ಯಾರ್ಥಿ ನಿಲಯದ ರೂಮ್ ನಂ.07ರ ನಿವಾಸಿಗಳು. ಈಗಾಗಲೆ ಒಂದು ಕಾದಂಬರಿ ಮತ್ತು ಕಿರುಗವಿತೆಗಳ ಸಂಕಲನವನ್ನು ಪ್ರಕಟಿಸಿರುವ ಇವರು ಯುವ ಸಾಹಿತಿಯಾಗಿ ತಮ್ಮನ್ನು ಗುರುತಿಸಿಕೊಂಡಿದ್ದಾರೆ. ಸಾಹಿತ್ಯ ಕ್ಷೇತ್ರದಲ್ಲಿ ಮಾಡಿದ ಸೃಜನಶೀಲ ಕೆಲಸಕ್ಕಾಗಿ ಪುರಾಸ್ಕಾರಗಳನ್ನೂ ಪಡೆದಿದ್ದಾರೆ. ಸದ್ಯ ದ್ರಾವಿಡ ಸಂಸ್ಕøತಿ ಅಧ್ಯಯನ ವಿಭಾಗದಲ್ಲಿ ಗಜಲ್ ಸಾಹಿತ್ಯದ ಮೇಲೆ ಸಂಶೋಧನೆ ನಡೆಸುತ್ತಿದ್ದಾರೆ.  ಎರಡೆ ನಿಮಿಷದ ಮೌನಾಚರಣೆ ನನ್ನ ಮುಂಬರುವ ಸಾವಿಗೆ ನಾನಿದ್ದಾಗಲೇ ಮಾಡಿಬಿಡಿ ಎರಡೆ ನಿಮಿಷದ ಮೌನಾಚರಣೆ ಕಟು ಮಾತುಗಳಿಗಿಂತ ಮೌನವೆ ಬಲು ಹಿತವೆನಿಸುವ ಎರಡೆ ನಿಮಿಷದ ಮೌನಾಚರಣೆ ಕಲಿಸಬೇಕಿಲ್ಲ ಯಾರಿಗೂ ಗಾಂಭೀರ್ಯದ ನಟನೆ ಸಾವೆಂಬುದು ಕರುಣೆ ಬಿತ್ತುವ ಕೂರಿಗೆ ಒಳಗಿನ ಹುನ್ನಾರಕ್ಕಿಂತ ಗಂಟುಮೋರೆಯ ಮುನಿಸೆ ಲೇಸೆನಿಸುವ ಎರಡೆ ನಿಮಿಷದ ಮೌನಾಚರಣೆ ಆಕಳಿಕೆ, ಕೆಮ್ಮು, ಸೀನುಗಳೆಲ್ಲ ಭಂಗ ತರಬಹುದು ನಿಮ್ಮ ಶ್ರದ್ಧೆಗೆ ಮುಖವಾಡ ಕಳಚುವ...

ನಮಗಿಂಥ ಮಳೆ ಬೇಕಿತ್ತು

ನಿಂತ ನೀರಡಿ ಭೂಮಿ ಕೊಳೆತು ನಾರುತ್ತಿದೆ ಬಾಚಿದ ಕ್ರಾಪಿನಡಿ ಮುದ್ದೆಮಿದುಳು ನಾರು ನಾರಾಗಿದೆ ಮೂಲ ಮರೆತ ಕುರುಡು ಮಂಡೆಗಳು ಮತಾಂಧ ಮೊರಿಯೊಳಗೆ ನುಗ್ಗಿ ನಾರು, ಕೊಳೆಗಳಿಗೀಗ ಸುಗ್ಗಿ ಸಿದ್ಧಾಂತದ ಗುಂಡುಕಲ್ಲಿಗೆ ರಕ್ತಾಭಿಷೇಕ ದೇಹಪ್ರಸಾದ ಎಲ್ಲಾ ಮೆದ್ದು ಕೊಬ್ಬಿ ಕೆನೆಯುವ ಶರಧಿ ಕಸ ಸುರಿದಿದ್ದು ನಮ್ಮ ಮನೆಯಂಗಳಕೆ ಜುಬ್ಬಾ, ಪೈಜಾಮ, ಟೊಪ್ಪಿ ಎಲ್ಲ್ಲೂ ಕಲೆಯಿಲ್ಲ ನಿತ್ಯ ಶುಭ್ರ ವಿನೂತನ ಪತಾಕೆಯಲ್ಲಿ ಸುತ್ತಿಟ್ಟ ಎಳ್ಳು ಜೀರಿಗೆ ಜನನ ಮರಣಗಳ ಲೆಕ್ಕ ಬರೆಯುತ್ತಿದೆ ಇದಲ್ಲವೇ? ಮಾಯಲಾರದ ಗಾಯ ವಾಸಿಯಾಗದ ಹುಣ್ಣು ನನ್ನೂರು ಕಾಯುತ್ತಿತ್ತು ಭೂಮಿ ನೆಲ ಉತ್ತು ವರುಣ ನೀರು ಹನಿಸಿದರೆ ತುಳಿದ ಪಾದದಡಿಯಿಂದ ಅಡಿಮೇಲಾದ ಮಣ್ಣಿಂದ ಪ್ರೀತಿಗರಿಕೆ ಚಿಗುರೊಡೆಯಲು ಸಾಮರಸ್ಯ ನಂದನದಲ್ಲಿ ಹೂ ಅರಳಲು ಹೌದು ನಮಗಿಂಥ ಮಳೆಬೇಕಿತ್ತು ಹನುಮನ ಗುಡಿಯ ಕೆಸರ ಖಾದ್ರಿ ಹುಸೇನರ ಕೈ ತೊಳೆಯುತ್ತಿತ್ತು ಮಸೀದಿಯಲ್ಲಿ ತುಂಬಿದ ಕೊಳೆನೀರ ರಾಮ, ಕೇಶವರ ಕೈ ಹೊರಚೆಲ್ಲುತ್ತಿತ್ತು ಕೊಚ್ಚೆ ಕೊಳೆ ತೊಳೆಯುವ ಸ್ವಚ್ಛಮಳೆಯೊಂದು ಬೇಕಿತ್ತು                                              ...

ನೀರ ಹಸಿವು

ಇಮೇಜ್
ದೇರಪ್ಪನ ಮನೆಯ ಹಿತ್ತಲಿಗೆ ಸಂಜೆಯ ವೇಳೆಗೆ ಎರಡು ಲಾರಿಗಳು ಬಂದು ನಿಂತವು. ಅದರಿಂದ ಅನ್ಯಗ್ರಹಗಳಿಂದ ಬಂದಂತಿದ್ದ ಹತ್ತರಿಂದ ಹದಿನೈದು ಜನ ಇಳಿದರು. ದೇಹಪೂರ್ತಿ ಕಂದು ಬಣ್ಣದ ಧೂಳು, ಹರಕಲು ಅಂಗಿ, ಮೊಟುದ್ದ ಪ್ಯಾಂಟು, ಇನ್ನೂ ಕೆಲವರು ಬೈರಾಸಲ್ಲೆ1 ಮಾನ ಮುಚ್ಚಿಕೊಂಡಿದ್ದರು. ಲಾರಿಯಿಂದ ಸ್ಟವ್ ಕೆಳಗಿಳಿಸಿದವರೆ ಅಲ್ಲೆ ಅನ್ನಕ್ಕೆ ನೀರಿಟ್ಟರು. ಕೆಲವರು ಇತರೆ ಕೆಲಸದಲ್ಲಿ ತೊಡಗಿಕೊಂಡರು. ತುಕ್ರ ಪೂಜಾರಿಯ ಗಡಂಗಿಗೆ2 ಹೋಗಿದ್ದ ಟೋಕ್ಕಯ್ಯ ಇದನ್ನೆ ನಿಂತು ನೋಡುತ್ತಿದ್ದ. ಆತ ದೇರಪ್ಪನ ಮನೆಗೆ ಯಾರೊ ಒಕ್ಕಲಿನವರು ಬಂದಿದ್ದಾರೆ ಎಂದೆ ಭಾವಿಸಿದ.     ತುಕ್ರ ಪೂಜಾರಿಯ ಗಡಂಗಿಗೆ ಕಳ್ಳು ಸಪ್ಲೈ ಮಾಡುವುದು ಕೂಚ ಪೂಜಾರಿ. ಆತ ಬೇಡಿಕೆಗೆ ತಕ್ಕಂತೆ ನೀರನ್ನು ಧಾರಳವಾಗಿ ಬೆರೆಸುತ್ತಿದ್ದ. ಟೋಕ್ಕಯ್ಯನಿಗೆ ಕಳ್ಳು ಕುಡಿರೆ ಜುಲಾಬು3 ಶುರುವಾಗುತ್ತದೆ. ರಾತ್ರಿ ನಿಶೆಯೇರದಿದ್ದರೆ ಹೆಂಡತಿಯ ಜೊತೆ ಮಾತಾಡುವ ತಾಕತ್ತೇ ಇರುತ್ತಿರಲಿಲ್ಲ. ಆದ್ದರಿಂದ ನಿತ್ಯ ಧರ್ಣಪ್ಪನ ಅಂಗಡಿಯ ಕಂಟ್ರಿ4 ಕುಡಿಯುವವನಿಗೆ ಇವತ್ತು ದುಡ್ಡು ಸಾಲದೆ ತುಕ್ರ ಪೂಜಾರಿಗೆ ದರುಶನ ನೀಡಿ ಬಂದಿದ್ದ. ರಾತ್ರಿ ಕಳ್ಳಿನ ಉಪದ್ರದಿಂದ  ಗಡಿ ಗಡಿ ಚೊಂಬು ಹಿಡಿದು ಹಿತ್ತಲಿಗೊಮ್ಮೆ ಹೋಗುತ್ತಿದ್ದ. ರಾತ್ರಿ ಹೀಗೆ ಹಿತ್ತಲಲ್ಲಿ ಸಣ್ಣ ಲೈಟೊಂದನ್ನು ಹಿಡಿದುಕೊಂಡು, ಚೊಂಬನ್ನು ಎದುರಿಗಿಟ್ಟು ತುಕ್ರÀ ಪೂಜಾರಿಗೆ ಬೈಯುತ್ತಾ ಕುಳಿತಿದ್ದ. ಇದ್ದಕ್ಕಿಂದ್ದಂತೆ ‘ಸೊಂಯ್....’...